🔥 TRENDING માનગઢમાં ધોધમાર વરસાદ, બજારમાં પાણી ભર... સુરતના ટેક્સટાઇલ ઉદ્યોગમાં યાર્ન ભાવ વ... સુરતમાં ધારાસભ્ય કૌશિકભાઇ વેકરીયાએ સુદ... રામદેવપીર મંદિર અમરેલી રિલાયન્સનો 27 લાખનો માલ ધરાવતો ટ્રક ચો... रायगडमध्ये दुचाकीचा चुराडा: पालदाड पुल...
15 Sep 2026
ગુજરાતી मराठी ਪੰਜਾਬੀ বাংলা

ದೇವದುರ್ಗ ಚಿಕ್ಕ ಹೂನ್ನಕುಣಿಯಲ್ಲೇ ನೀರಾವರಿ ಇಲಾಖೆ ಉಳಿಸಿ ಕರವೇ ಆಗ್ರಹ ಕಚೇರಿ ಸ್ಥಳಾಂತರ ನಿರ್ಧಾರ ಕೈಬಿಡದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ

✍️ Reporter: MAHAMAD WALI QURESHI 🗓 15 Sep 2026, 10:32 AM 👁 14
Watch on: ▶️ YouTube
Share: 💬 WhatsApp 📘 Facebook 𝕏 Post
ದೇವದುರ್ಗ ಚಿಕ್ಕಹೊನ್ನಕುಣಿಯಲ್ಲೇ ನೀರಾವರಿ ಇಲಾಖೆಉಳಿಸಿ ಕರವೇಆಗ್ರಹ ಕಚೇರಿ ಸ್ಥಳಾಂತರದ ನಿರ್ಧಾರ ಕೈಬಿಡದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ

ನೀಡ್ 24 ನ್ಯೂಸ್

ದೇವದುರ್ಗ: ರೈತರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಬೇಕಾದ ನಾರಾಯಣಪುರ ಬಲದಂಡೆ ಕಾಲುವೆಯ ಚಿಕ್ಕಹೊನ್ನಕುಣಿ ವಿಭಾಗ ಸಂಖ್ಯೆ?6ರ ನೀರಾವರಿ ಇಲಾಖೆಯ ಕಚೇ-ರಿಯನ್ನು ರಾಯಚೂರಿಗೆ ಸ್ಥಳಾಂತರಿಸುವ ಕ್ರಮಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ದೇವದುರ್ಗ ತಾಲೂಕು ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕಚೇರಿ ಸ್ಥಳಾಂತರಿಸುವ ನಿರ್ಧಾರವನ್ನು ಕೂಡಲೇ ಕೈಬಿಟ್ಟು, ಮಾಧ್ಯಮದವರೊಂದಿಗೆ ಚಿಕ್ಕಹೊನ್ನಕುಣಿಯಲ್ಲೇ ನೀರಾವರಿ ಕಚೇರಿಯನ್ನು ಮುಂದುವರಿಸಬೇಕು ಎಂದು ಸಂಘ ಆಗ್ರಹಿಸಿದೆ. ಈ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ

ನಂದಪ್ಪ ಪಿ. ಮಡ್ಡಿ ಹಾಗೂ ಕಾರ್ಯದರ್ಶಿ

ಗುರುನಾಥ ರೆಡ್ಡಿ, ಚಿಕ್ಕಹೊನ್ನಕುಣಿಯಲ್ಲಿರುವ ನೀರಾವರಿ ಕಚೇರಿ ಸುತ್ತಮುತ್ತಲಿನ ಸಾವಿರಾರು ರೈತರಿಗೆ ನೇರ ಸಂಪರ್ಕದ ಕೇಂದ್ರವಾಗಿದೆ. ಕಾಲುವೆ ನಿರ್ವಹಣೆ, ನೀರು ಹರಿವು, ಕಾಲುವೆ ದುರಸ್ತಿ, ನೀರಿನ ಕೊರತೆ ಹಾಗೂ ಬೆಳೆಗಳಿಗೆ ಸಂಬಂಧಿಸಿದ ತುರ್ತು ಸಮಸ್ಯೆಗಳನ್ನು ರೈತರು ಅಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲೇ ಪರಿಹಾರ ಪಡೆಯಲು ಈ ಕಚೇರಿ ಅತ್ಯಂತ ಅನುಕೂಲವಾಗಿದೆ ಎಂದು ತಿಳಿಸಿದರು.

"ನೀರಾವರಿ ಇಲಾಖೆ ರೈತರಿಗೆ ಅನುಕೂಲ ಕಲ್ಪಿಸಬೇಕೇ ಹೊರತು, ರೈತ-ರಿಂದ ದೂರವಾಗಬಾರದು. ಕಾಲುವೆಯಲ್ಲಿ ನೀರು ನಿಂತಾಗ, ಕಾಲುವೆ ಒಡೆದಾಗ ಅಥವಾ ಬೆಳೆಗಳಿಗೆ ನೀರಿನ ಕೊರತೆಯಾದಾಗ ರೈತರು

ಅವರು ಹೇಳಿದರು. ದೂರದ ರಾಯಚೂರಿನ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು" ಎಂದು

ಮುಂದುವರಿಸಬೇಕು. ಇಲ್ಲವಾದಲ್ಲಿ ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಚಿಕ್ಕಹೊನ್ನಕುಣಿ ವಿಭಾಗ ಸಂಖ್ಯೆ?6ರ ನೀರಾವರಿ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ. ಇದೇ ಸ್ಥಳದಲ್ಲಿ ಕಚೇರಿಯನ್ನು ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಜಾಲಹಳ್ಳಿ ಹೋಬಳಿ ಕರವೇ ಘಟಕದ ಅಧ್ಯಕ್ಷರಾದ ತಮ್ಮಣ ಹೆರುಂಡಿ ಉಪಸ್ಥಿತರಿದ್ದರು.. ವರದಿ ವಲಿ ಖುರೇಷಿ
📲Get App